ಕನ್ನಡದ ಬಾವುಟ

ಇರಲಿ ನಮ್ಮೆಲ್ಲರ ಮನೆಯಲಿ
ಕನ್ನಡದ ಬಾವುಟ|
ಹಾರಲೆಲ್ಲರ ಮನದಲಿ
ಅದುವೆ ಪಟಪಟ|
ಕನ್ನಡವೆಂದರೆ ಅದು
ಬರಿಯ ಭಾಷೆಯಲ್ಲ
ನಮ್ಮನಿಮ್ಮೆಲ್ಲರ ಮಾತೃಭಾಷೆ|
ಅತ್ಯಧಿಕ ಜ್ಞಾನಪೀಠಗಳ
ತಂದುಕೊಟ್ಟಾ ಭಾಷೆ||

ಆಡುವಾ ಮಾತಿನಂತೆಯೇ
ಬರೆಯುವಾ ಭಾಷೆ|
ಬರೆದರೆ ಮುತ್ತು ಮಣಿಗಳ
ಪೋಣಿಸಿದಂತೆ ಕಾಣುವಾ ಭಾಷೆ||
ಕರ್ನಾಟಕ ಸಂಗೀತಕೆ
ಇದುವೆ ಮಾತೃಭಾಷೆ||
ಪ್ರತಿ ವರ್ಷ ಅತೀಹೆಚ್ಚು
ಹೊಸಾ ಹೊಸ
ಪದಗಳು ಹುಟ್ಟಿಕೊಳ್ಳುವ ಭಾಷೆ||

ಕನ್ನಡವೊಂದು ಸುಮಧುರ ಭಾಷೆ
ಕನ್ನಡವೊಂದು ಸುಲಲಿತ ಭಾಷೆ |
ಕಸ್ತೂರಿ ಕನ್ನಡ ಈ ನಮ್ಮ ಭಾಷೆ
ಕವಿಜನ ಶ್ರೇಷ್ಟರು ಬೆಳೆಸಿದಾಭಾಷೆ
ದಾಸರು ಶರಣರ ನೆಚ್ಚಿನ ಭಾಷೆ||

ನಮ್ಮ ಬಾವುಟದಲ್ಲಿದೆ
ಕೆಂಪು ಹಳದಿಯ ಬಣ್ಣ|
ಕೆಂಪು ಕನ್ನಡಾಂಬೆಯ
ಹಣೆಯ ಕುಂಕುಮ ತಿಲಕ |
ಹಳದಿ ಕನ್ನಡಾಂಬೆಯ ಕೆನ್ನೆಗಚ್ಚುವ ಅರಿಶಿಣ
ಇಂಥ ವಿಶೇಷವೀ ಬಾವುಟ||

ಹುಟ್ಟಲಿ ಹತ್ತಾರು ರಾಷ್ರ್ಟಕವಿಗಳು
ಹುಟ್ಟಲಿ ಹತ್ತಾರು ವರಕವಿಗಳು|
ಬೆಳಗಲಿ ನೂರಾರು ಸಮಗ್ರ ಸಾಹಿತಿಗಳು
ಬರಲಿ ಇನ್ನತ್ತಾರು ಜ್ಞಾನಪೀಠ ಪ್ರಶಸ್ತಿಗಳು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನವೆಂಬರ್ ನಾಯಕರು
Next post ಪಿಸುಮಾತು

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

cheap jordans|wholesale air max|wholesale jordans|wholesale jewelry|wholesale jerseys